ಕುಮಟಾ: ಇಲ್ಲಿನ ಶಾಸಕರ ಮಾದರಿ ಶಾಲೆ ನೆಲ್ಲಿಕೇರಿಯಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ 10 ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಭಾಗವಹಿಸಿದ ಬಹುತೇಕ ಸ್ಪರ್ಧೆಗಳಲ್ಲಿ ಸ್ಥಾನಗಳಿಸುವ ಮೂಲಕ ಸಾಧನೆ ಮಾಡಿರುತ್ತಾರೆ. ಕಿರಿಯರ ವಿಭಾಗ ಪಲ್ಲವಿ ಶಾನಭಾಗ (ತುಳು ಕಂಠಪಾಠ ಪ್ರಥಮ), ನಿಖಿಲ ಪಟಗಾರ (ಚಿತ್ರಕಲೆ ಪ್ರಥಮ), ಶ್ರೇಯಾ ಹೆಬ್ಬಾರ (ಭಕ್ತಿ ಗೀತೆ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ, ಲಘುಸಂಗೀತ ದ್ವಿತೀಯ), ಸುಮುಖ ನಾಯ್ಕ (ಕ್ಲೇ ಮಾಡಲಿಂಗ ದ್ವಿತೀಯ), ಸ್ನೇಹಾ ನಾಯ್ಕ (ಆಶುಭಾಷಣ ಪ್ರಥಮ, ಮರಾಠಿ, ಹಿಂದಿ, ಕಥೆಯಲ್ಲಿ ದ್ವಿತೀಯ), ಕೃತಿಕಾ ಭಟ್ಟ (ಧಾರ್ಮಿಕ ಪಠಣ ದ್ವಿತೀಯ) ಹಾಗೂ ದೇಶಭಕ್ತಿಗೀತೆಯಲ್ಲಿ ಶ್ರೀಷಾ, ದೀಕ್ಷಾ, ಸೃಷ್ಟಿ, ಶ್ರೀಲಕ್ಷ್ಮಿ, ನಂದನ, ಕುಶಾಲರವರ ತಂಡ ಪ್ರಥಮ ಬಹುಮಾನ ಪಡೆದಿದೆ. ಸ್ನೇಹಾ, ಸಮೀರ, ಕೃತಿಕಾ, ಪುಂಡಲೀಕ, ದ್ರುವ, ವಿನುತಾರವರ ತಂಡ…
Read More