ದಿನಾಂಕ 08-09-2017 ರಂದು ನಡೆದ ಕುಮಟಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭಾಗವಹಿಸಿದ 20 ವಿಧದ ಸ್ಪರ್ಧೆಯಲ್ಲಿ 14ರಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸೃಜನಾ ಡಿ.ನಾಯಕ (ಇಂಗ್ಲೀಷ ಕಥೆ ಹೇಳುವುದು,ಅಭಿನಯ ಗೀತೆ)ಅಕ್ಷತಾ ಎಸ್.ಭಟ್ಟ (ಕನ್ನಡ ಕಂಠಪಾಠ),ಕನ್ನಿಕಾ ಆರ್ ಭಟ್ಟ(ಹಿಂದಿ ಕಂಠಪಾಠ),ಶ್ರಾವಣಿ ಎಮ್ ಪೂಜೇರಿ (ಛದ್ಮ ವೇಷ),ವಿಘ್ನೇಶ ಹೊಸಮನೆ(ಚಿತ್ರಕಲೆ),ಶುಭಾ ವಿಷ್ಣು ನಾಯ್ಕ(ಕಥೆ ಹೇಳುವುದು,ಅಭಿನಯ ಗೀತೆ),ಜೀವನ ಪ್ರಕಾಶ ನಾಯ್ಕ(ಕ್ಲೇ ಮಾಡಲಿಂಗ್) ಆಶ್ರೀತಾ ಜಿ ಭಟ್ಟ (ಭಕ್ತಿಗೀತೆ),ಸ್ನೇಹಾ ಉದಯ ನಾಯ್ಕ (ಆಶುಭಾಷಣ)ಚಂದನ ಹೆಗq, ವಿಶೇಷ ಕಾಮತ (ಕ್ವಿಜ್) ಗೌರವ ಶ್ರವಣ ಭಟ್ಟ ,ಸಮೀರ ದಿವಾಣ, ಶ್ರೇಯಾ ಹೆಬ್ಬಾರ,ಸಂಜನಾ ಪಂಡಿತ, ವಿನುತಾ ನಾಯ್ಕ, ಸ್ನೇಹಾ ನಾಯ್ಕ,(ದೇಶಭಕ್ತಿಗೀತೆ)ಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶ್ರೇಯಾ ಹೆಬ್ಬಾರ(ಕನ್ನಡ…
Read MoreDay: March 23, 2018
ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಇತ್ತೀಚೆಗೆ ಏಮ್.ಜಿ.ಸಿ ಪದವಿ ಪೂರ್ವ ಕಾಲೇಜು ಸಿದ್ಧಾಪುರದಲ್ಲಿ ನಡೆದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಧನುಷ ವಿ ಹೆಗಡೆ 200ಮೀ ಓಟ ಪ್ರಥಮ ಸ್ಥಾನ ಪಡೆದು, ರಮ್ಯಶ್ರೀ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು, ಶಿಲ್ಪಾ ಕಿಣಿ, ವಾಣಿಶ್ರೀ ಮತ್ತು ರಮ್ಯಶ್ರೀ ಥ್ರೋಬಾಲ್ ನಲ್ಲಿ, ಸನ್ನಿಧಿ ಪ್ರಭು ಬ್ಯಾಟ್ ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ. ರಮ್ಯಶ್ರೀ ಭರ್ಜಿ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ, ಮಯೂರ್ ನಾಯ್ಕ ಹರ್ಡಲ್ಸನಲ್ಲಿ ತೃತೀಯ ಸ್ಧಾನ ಪಡೆದಿದ್ದಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
Read Moreರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ಪುಟಾಣಿಗಳ ಪ್ರತಿಭಾ ಪ್ರದರ್ಶನ
ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನೆರವೇರಿತು. ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ಕೃಷ್ಣ ವೇಷ, ಹನುಮಂತನ ವೇಷ, ಬುಡಬುಡಕಿದಾಸ, ಬಳೆಗಾರನ ವೇಷ ಮುಂತಾದ ವೇಷಭೂಷಣ ಮಾಡಿ ಜನರಿಂದ ಮೆಚ್ಚುಗೆ ಗಳಿಸಿದರು.ನೃತ್ಯ, ಹಾಡು, ಕಥೆಗಳನ್ನು ಹೇಳಿ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹೊಮ್ಮಿಸಿದರು. ಮುಖ್ಯಾಧ್ಯಾಪಕರು, ಶಿಕ್ಷಕವೃಂದ ಹಾಗೂ ಶೈಕ್ಷಣಿಕ ಸಲಹೆಗಾರರಾದ ಶ್ರೀ.ಆರ್.ಎಸ್.ದೇಶಭಂಡಾರಿಯವರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದು ಮಕ್ಕಳ ಪ್ರತಿಭೆಯ ಅನಾವರಣವನ್ನು ಕಣ್ತುಂಬಿಕೊಂಡರು.
Read Moreಅಂತರಾಷ್ಟ್ರೀಯಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಪಡೆದ ಅಭಿರಾಮ ಎ.ಎನ್.
ಕುಮಟಾದ ಬಾಡ ಗ್ರಾಮದ ನಿವಾಸಿ ಪ್ರಸ್ತುತ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಏಳನೇ ವರ್ಗದಲ್ಲಿ ಓದುತ್ತಿರುವ ಅಭಿರಾಮ ಎ.ಎನ್ ಈತನು ಹೈದ್ರಾಬಾದಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟಾ ಕ್ರೀಡಾಕೂಟದಲ್ಲಿ ಕಟಾದಲ್ಲಿ ಚಿನ್ನದ ಪದಕ ಹಾಗೂ ಗ್ರಾಂಡ್ ಚಾಂಪಿಯನ್ ಕುಮಿಟೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಇವನು ಕರಾಟೆ ಶಿಕ್ಷಕರಾದ ಅರವಿಂದ ನಾಯ್ಕ ಅವರಿಂದ ಕರಾಟೆ ಅಭ್ಯಾಸ ನಡೆಸಿರುತ್ತಾನೆ. ಇವನ ಸಾಧನೆಗೆ ಶಾಲಾ ಆಡಳಿತಮಂಡಳಿಯವರು, ಮುಖ್ಯಶಿಕ್ಷಕರು, ಶಿಕ್ಷಕವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Read Moreಕ್ರೀಡಾ ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆ ತೋರಿದ ಕೊಂಕಣ ಎಜ್ಯುಕೇಶನ್ ವಿದ್ಯಾರ್ಥಿಗಳು
ತಾಲೂಕಿನ ಮಿರ್ಜಾನಿನ ಬಿ.ಜಿ.ಎಸ್.ಕೇಂದ್ರೀಯ ವಿದ್ಯಾಲಯದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ ನಡೆದ ಕ್ರೀಡಾ ಕಲೋತ್ಸವದಲ್ಲಿ ಭಾಗವಹಿಸಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರ ಹಾಗೂ ಸಿ.ವಿ.ಎಸ್.ಕೆ.ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಸರಸ್ವತಿ ವಿದ್ಯಾಕೇಂದ್ರ: ವಿಘ್ನೇಶ ಹೊಸಮನೆ ಪೇಂಟಿಂಗ್ನಲ್ಲಿ ಪ್ರಥಮ, ಶ್ರೀರಾಮ ಜಿ. ಪಟಗಾರ ಚಿತ್ರಕಲೆಯಲ್ಲಿ ದ್ವಿತೀಯ, ಚಂದನ ಹೆಗಡೆ, ವಿಶೇಷ ಕಾಮತ್ ರಸಪ್ರಶ್ನೆಯಲ್ಲಿ ಪ್ರಥಮ, ಹರ್ಷಿತಾ ಎ.ಗೌಡ ರಂಗೋಲಿಯಲ್ಲಿ ಪ್ರಥಮ, ಶುಭಾ, ವಿಭಾ,ಖುಷಿ,ದೀಪಾ,ಶ್ರೇಯಾ,ಸುಷ್ಮಿತಾ ಇವರ ತಂಡ ಜಾನಪದ ನೃತ್ಯದಲ್ಲಿ ಪ್ರಥಮ ಹಾಗೂ ಸಂಜನಾ ಪಂಡಿತ್À ಸ್ಮರಣಶಕ್ತಿಯಲ್ಲಿ ದ್ವಿತೀಯ ಸ್ಥಾನ ಹಾಗೂ ಬಾಲಕರ ಕಬಡ್ಡಿ ತಂಡ ದ್ವಿತೀಯ ಮತ್ತು ಬಾಲಕಿಯರ ಕಬಡ್ಡಿ ತಂಡ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿಯೂ ಬಹುಮಾನ ಪಡೆದು ವಿಶೇಷ ಗಮನ ಸೆಳೆದರು. ಸಿ.ವಿ.ಎಸ್.ಕೆ.ಪ್ರೌಢ ಶಾಲೆ: ಶಿಲ್ಪಾ ಪಟಗಾರ ರಂಗೋಲಿಯಲ್ಲಿ ಪ್ರಥಮ, ವರುಣ ಹೆಗಡೆ…
Read Moreಸರಸ್ವತಿ ವಿದ್ಯಾ ಕೇಂದ್ರದಲ್ಲಿ “ಗುರು ಪೂರ್ಣಿಮೆ”
ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಗುರುಪೂರ್ಣಿಮೆಯನ್ನು ವಿದ್ಯಾರ್ಥಿಪ್ರತಿನಿಧಿಗಳು ಮತ್ತು ಶಿಕ್ಷಕ ವೃಂದದವರು ವ್ಯಾಸಪೂಜೆ ನೆರವೇರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಆಷಾಢ ಮಾಸದ ಹುಣ್ಣಿಮೆಯಂದು ಪ್ರತೀವರ್ಷ ಗುರುಪೂರ್ಣಿಮೆ ಆಚರಿಸಲಾಗುತ್ತದೆ. ಪ್ರಾರಂಭದಲ್ಲಿ ಕುಮಾರಿ ಶ್ರೇಯಾ ಹೆಬ್ಬಾರ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಏಳನೇ ವರ್ಗದ ವಿದ್ಯಾರ್ಥಿ ಶುಭಾ ವಿಷ್ಣು ನಾಯ್ಕ ಗುರುಪೂರ್ಣಿಮೆಯ ಕುರಿತಾಗಿ ಮಾತನಾಡುತ್ತ. ಒಂದಕ್ಷರ ಕಲಿಸಿದವನೂ ಗುರುವಾಗುತ್ತಾನೆ. ಅಜ್ಞಾನದ ಕಣ್ಣಿಗೆ ಜ್ಞಾನದ ಅಂಜನ ಹಚ್ಚಿ ಕಣ್ಣು ತೆರೆಸುವವನು ಗುರು. ನಮ್ಮ ವಿದ್ಯಾರ್ಥಿಜೀವನದಲ್ಲಿ ಕಲಿಸುವ ಶಿಕ್ಷಕರೇ ನಮಗೆ ಗುರುವಿನ ಸ್ಥಾನದಲ್ಲಿ ಇರುವವರು. ಶಿಕ್ಷಕರನ್ನು ಗೌರವಿಸುವವರು ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು. ಹಿರಿಯರನ್ನು ಗುರುಗಳನ್ನು ಗೌರವಿಸಬೇಕು ಎಂದರು. ಶಿಕ್ಷಕಿ ಸುವರ್ಣ ಮಯ್ಯರ್ ದಿಕ್ಸೂಚಿ ಮಾತನ್ನಾಡಿದರು. ಜಗತ್ತು ನಿಂತಿರುವುದು ಗುರುವಿನ ತತ್ವದ ಮೇಲೆ ಗುರು ಎಂದರೆ ಅಂಧಕಾರ ಕಳೆಯುವವನು, ಗುರುವೆಂದರೆ ಅಕ್ಷಯ, ಅದಮ್ಯ ಚೈತನ್ಯ, ಗುರುವಿಗೆ ವಂದನೆ ಮೊದಲು ಸಲ್ಲಬೇಕು…
Read Moreಜಿಲ್ಲಾಮಟ್ಟದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸರಸ್ವತಿ ವಿದ್ಯಾಕೇಂದ್ರ
ದಿನಾಂಕ 06-10-2017 ರಂದು ಕಾರವಾರದ ಬಾಲಮಂದಿರ ಸಂಸ್ಥೆಯಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಶಿಕ್ಷಣ ಇಲಾಖಾ ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ ಭಾಗವಹಿಸಿದ ಎಲ್ಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿರುತ್ತಾರೆ. ಸೃಜನಾ ಡಿ.ನಾಯಕ ಇಂಗ್ಲೀಷ ಕಂಠಪಾಠ ಮತ್ತು ಅಭಿನಯ ಗೀತೆಯಲ್ಲಿ ಪ್ರಥಮ, ಕಥೆ ಹೇಳುವುದು ದ್ವಿತೀಯ, ಅಕ್ಷತಾ ಎಸ್.ಭಟ್ಟ ಕನ್ನಡ ಕಂಠಪಾಠ ಪ್ರಥಮ, ವಿಘ್ನೇಶ ಹೊಸಮನೆ ಚಿತ್ರಕಲೆಯಲ್ಲಿ ಪ್ರಥಮ, ಸ್ನೇಹಾ ಉದಯ ನಾಯ್ಕ ಆಶುಭಾಷಣದಲ್ಲಿ ಪ್ರಥಮಸ್ಥಾನ ಗಳಿಸಿರುತ್ತಾರೆ. ಶುಭಾ ವಿಷ್ಣು ನಾಯ್ಕ ಅಭಿನಯ ಗೀತೆಯಲ್ಲಿ ದ್ವಿತೀಯ ಕಥೆ ಹೇಳುವುದರಲ್ಲಿ ತೃತೀಯಸ್ಥಾನ, ಆಶ್ರೀತಾ ಜಿ ಭಟ್ಟ ಭಕ್ತಿಗೀತೆ ದ್ವಿತೀಯ, ಜೀವನ ಪ್ರಕಾಶ ನಾಯ್ಕ ಕ್ಲೇ ಮಾಡಲಿಂಗ್ ನಲ್ಲಿ ದ್ವಿತೀಯ, ಗೌರವ ಭಟ್ , ಸಮೀರ ದಿವಾಣ, ಸ್ನೇಹಾ ನಾಯ್ಕ, ಸಂಜನಾ ಪಂಡಿತ, ವಿನುತಾ…
Read More